ಸಂವಾದ

ಆಕಾಶ
ಇಬ್ಬನಿಯ ಹಾಗೆ ಕರಗುತ್ತಲಿದೆ.
ಸೂರ್ಯ
ಬಾವಲಿಯಾಗಿದ್ದಾನೆ.
ಬೆಟ್ಟಗುಡ್ಡ, ಕಣಿವೆ-ಕಂದರಗಳು
ಚಂದಿರನನ್ನು ನುಂಗುತ್ತಲಿವೆ.
ಚುಕ್ಕಿಗಳ ಕಂಗಳಿಗೆ ಪೊರೆ ಬಂದಿದೆ.
ಮೋಡಗಳು ರೆಕ್ಕೆ ಕಟ್ಟಿಕೊಂಡು
ವಲಸೆ ಹೋಗುತ್ತಿವೆ.
ಕಪ್ಪನ್ನು ಹೊದ್ದ ರಸ್ತೆಗಳು
ಮುಸುಕಿನೊಳಗೆ ಬಿಕ್ಕುತ್ತಿವೆ.
ನನ್ನ ಮುದ್ದು ಕವಿತೆಯ
ಕಳೇಬರವನ್ನು ಇರುವೆಗಳು
ಮೆರವಣಿಗೆಯಲ್ಲಿ ಒಯ್ಯುತ್ತಿವೆ.

ಸಹಾಯ! ಹೆದರಿಕೆಯಾಗುತ್ತಿದೆ.


ಪುಟ್ಟ ಹುಡುಗಿ ……ಹೆದರಬೇಡ!
ನಾನಿಲ್ಲಿಯೇ ಇದ್ದೇನೆ.
ನನ್ನೆದೆಯ ಮೇಲೆ ಒರಗಿಕೊ…
ಮೆಲ್ಲಗೆ ತಟ್ಟುತ್ತೇನೆ.
ಹಿತವಾಗಿ ತೆರೆದುಕೊ…
ಸುಂದರ ಕನಸುಗಳನ್ನು ಕರೆಯುತ್ತೇನೆ.
ಬೆಚ್ಚಗೆ ಮಲಗಿಕೊ…
ನಾಳೆಗಳು ಸುಂದರವಾಗಿರುತ್ತವೆ.
ಬೆಚ್ಚಗೆ ಮಲಗಿಕೊ…
ನಾಳೆಗಳು ಸುಗಂಧಮಯವಾಗಿರುತ್ತವೆ.
ಬೆಚ್ಚಗೆ ಮಲಗಿಕೊ…
ನಾಳೆಗಳು ಸುಖಮಯವಾಗಿರುತ್ತವೆ.
ಬೆಚ್ಚಗೆ ಮಲಗಿಕೊ…


Previous post ಆ ಕೆರೆ
Next post ಪಡುವಣದ ಕಡಲು

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys